`ಮಂಜುಮ್ಮೆಲ್ ಬಾಯ್ಸ್ʼ ಸಿನಿಮಾಗೆ ನೋಟೀಸ್ ಕಳಿಸಿ ಟ್ರೋಲ್ ಆದ ಇಳಯರಾಜ

Most read

ಮಲಯಾಳಂ ಇಂಡಸ್ಟ್ರಿಯಲ್ಲಿ ಸದ್ಯ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದಂತ ಸಿನಿಮಾ ಎಂದರೆ ಮಂಜುಮ್ಮೆಲ್ ಬಾಯ್ಸ್ ಸಿನಿಮಾ. ಸಿಂಪಲ್ ಕಥೆಯನ್ನು ಜನರ ಮನಸ್ಸಿಗೆ ನಾಟುವಂತೆ ಹೇಳುವ ಚಾಕಚಕ್ಯತೆ ಮಲಯಾಳಂ ಇಂಡಸ್ಟ್ರಿಗೆ ಇದೆ. ಇದೀಗ ಅಂಥದ್ದೊಂದು ಸಿಂಪಲ್ ಕಥೆಯನ್ನಿಟ್ಟುಕೊಂಡೆ ಇಂಡಸ್ಟ್ರೀ ಗೆಲ್ಲುತ್ತಿದೆ. ಈ ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಕಣ್ಮಣಿ ಸಾಂಗ್ ವಿಚಾರವಾಗಿ ಇಳಯರಾಜ ಅವರು ಲೀಗಲ್ ನೋಟೀಸ್ ಕಳುಹಿಸಿದ್ದರು. ಇದೀಗ ಆ ವಿಚಾರಕ್ಕೇನೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಹಾಡಿನ ಹಕ್ಕು ಯಾವಾಗಲೂ ಮ್ಯೂಸಿಕ್ ಕಂಪನಿ ಮತ್ತು ನಿರ್ಮಾಪಕ ಬಳಿ ಇರುತ್ತದೆ. ಇಲ್ಲಿ ರೆಹಮಾನ್ ವಿಚಾರವಾಗಿ ಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆಯೂ ಚರ್ಚೆಯಾಗಿದೆ. ಈ ಹಿಂದೊಮ್ಮೆ ಎ.ಆರ್.ರೆಹಮಾನ್ ತಾವೂ ಕಂಪೋಸ್ ಮಾಡಿದ ಹಕ್ಕನ್ನು ತಮಗೂ ನೀಡಬೇಕೆಂಬ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತು. ಹಾಡಿನ ಹಕ್ಕಿನಲ್ಲಿ ನನಗೂ ಪಾಲು ಬೇಕು ಎಂದು ಹೇಳಿದ್ದರು. ಆದರೆ ಕೋರ್ಟ್ ಇದನ್ನು ನಿರಾಕರಣೆ ಮಾಡಿತ್ತು.

ಗುಣ ಸಿನಿಮಾದಲ್ಲಿ ಕಣ್ಮಣಿ ಹಾಡನ್ನು ಕಂಪೋಸ್ ಮಾಡಿದ್ದು ಇಳಯರಾಜ. ಈಗ ಈ ಹಾಡನ್ನು ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಈಗ ಈ ಹಾಡಿನ ಮೇಲೆ ನಮಗೂ ಹಕ್ಕಿದೆ ಎಂದು ಇಳಯರಾಜ, ಸಿನಿಮಾ ನಿರ್ಮಾಪಕ ಸೌಬಿನ್ ಶಾಹಿರ್ ಗೆ ನೋಟೀಸ್ ನೀಡಿದ್ದಾರೆ. ನನ್ನ ಒಪ್ಪಿಗೆ ಪಡೆಯದೇನೆ ಈ ಹಾಡನ್ನು ಬಳಸಿದ್ದಾರೆ. ಸರಿಯಾದ ರೀತಿಯಲ್ಲಿ ನನ್ನ ಒಪ್ಪಿಗೆ ಪಡೆಯದೆ ಹೋದಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.

ಆದರೆ ಈ ನೋಟೀಸ್ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸ್ನಾನ ಮಾಡುವಾಗ ಬಾತ್ ರೂಮಿನಲ್ಲಿ ಈ ಸಾಂಗ್ ಹಾಡಿದರೂ ಇಳಯರಾಜ ನೋಟೀಸ್ ನೀಡಬಹುದೇನೋ ಎಂಬಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

More articles

Latest article