ಹಾಸನ ಶೂಟ್ ಔಟ್: ಒಬ್ಬನನ್ನು ಮತ್ತೊಬ್ಬ ಕೊಂದು ತನಗೆ ತಾನೇ ಶೂಟ್ ಮಾಡಿಕೊಂಡನೇ?

Most read

ಹಾಸನ : ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದ ಬೆನ್ನಲ್ಲೇ, ಮೃತಪಟ್ಟಿರುವವರಲ್ಲಿ ಒಬ್ಬಾತ ಇನ್ನೊಬ್ಬನನ್ನು ಕೊಂದು ತಾನೂ ಶೂಟ್ ಮಾಡಿಕೊಂಡು ಸತ್ತಿರುವ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟ ಇಬ್ಬರೂ ವ್ಯಕ್ತಿಗಳನ್ನು ಈಗ ಗುರುತಿಸಲಾಗಿದ್ದು, ಶರಾಫತ್ ಅಲಿ (52) ಮತ್ತು ಆಸೀಫ್ (46) ಮೃತಪಟ್ಟವರು. ಈ ಪೈಕಿ ಆಸೀಫ್ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ವ್ಯಾಪಾರಿಯಾಗಿದ್ದರೆ, ಶರಾಫತ್ ಅಲಿ ಹಾಸನದ ಆಡುವಳ್ಳಿ ಬಡವಾಣೆಯಲ್ಲಿ ವಾಸವಿದ್ದರು. ಶರಾಫತ್ ದೆಹಲಿ ಮೂಲದ ವ್ಯಕ್ತಿ ಎಂದು ಗೊತ್ತಾಗಿದೆ.

ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕೆ.ಎ.09 ಎಂಬಿ 003868 ನೋಂದಣಿ ಸಂಖ್ಯೆಯ ಟೆರಾನೋ ಕಾರಿನಲ್ಲಿ ಇಬ್ಬರೂ ಹೊಯ್ಸಳ ನಗರಕ್ಕೆ ಬಂದಿದ್ದರು. ಇಬ್ಬರನ್ನೂ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲ್ಲಲಾಗಿದೆಯೇ ಅಥವಾ ಒಬ್ಬ ಮತ್ತೊಬ್ಬನನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರಬಹುದಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತ್ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

More articles

Latest article