“ಹಸಿರು ಬೆಂಗಳೂರು”: ನಗರ ಅರಣ್ಯ ಯೋಜನೆಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

Most read

·    

ಬೆಂಗಳೂರು: ಬೆಂಗಳೂರಿಗೆ ಹಿಂದಿನ ಹಸಿರುಮಯ ವೈಭವವನ್ನು ಮರುಕಳುಹಿಸುವ ಉದ್ದೇಶದಿಂದ “ಹಸಿರು ಬೆಂಗಳೂರು” ನಗರ ಅರಣ್ಯ ಉಪಕ್ರಮವನ್ನು ಕರ್ನಾಟಕದ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ನೆಹರು ತಾರಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ನಗರದ ಹಸಿರು ಪರಂಪರೆಯನ್ನು ಮರು ಸ್ಥಾಪಿಸುವ ದಿಟ್ಟ ನಿಲುವಿನಲ್ಲಿ “ಹಸಿರು ಬೆಂಗಳೂರು” ಉಪಕ್ರಮದ ಮೂಲಕ ಪ್ರಮುಖ ಹೆಜ್ಜೆ ಇಡಲಾಗಿದೆ ಎಂದು ಡಿ.ಕೆ. ಶಿವಕುಮಾರ್  ಹೇಳಿದರು.

“ನಗರಾದ್ಯಂತ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಹಾಗೂ  ಅಂತರ್ಜಲವನ್ನು ಮರುಪೂರಣಗೊಳಿಸಲು ನೆರವಾಗುತ್ತಿರುವ UBLR ನ ಉಪಕ್ರಮಕ್ಕೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಇಂದು ನಾವು ಸಹಿ ಹಾಕಿರುವ ಒಪ್ಪಂದದ ಮೂಲಕ ಇವರ ಈ ಕಾರ್ಯವನ್ನು ಔಪಚಾರಿಕಗೊಳಿಸಿದ್ದೇವೆ. ಪರಿಸರ ದಿನವು ಕೇವಲ ಸಾಂಕೇತಿಕವಾಗಿ ಸಸಿ ನೆಡುವುದಷ್ಟೇ ಅಲ್ಲದೆ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಿಸುವ ಧ್ಯೇಯ ನಮ್ಮದಾಗಿರಬೇಕು.ಈ ಎಲ್ಲಾ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.

ಇನ್ನು, “ಸ್ಥಳೀಯ ಪ್ರಭೇದಗಳು, ಹೆಚ್ಚಿನ ಸಾಂದ್ರತೆಯ ಮೈಕ್ರೊಫೊರೆಸ್ಟ್‌ಗಳ ಮೇಲೆ ಕೇಂದ್ರೀಕರಿಸಿ, ಸರ್ಕಾರವು ಬೆಂಗಳೂರಿನ ಪರಿಸರ ವಿಜ್ಞಾನವನ್ನು ಪುನರುಜ್ಜೀವನಗೊಳಿಸಲು ಬದ್ಧವಾಗಿದೆ, ಸುಸ್ಥಿರ, ಸಮುದಾಯ-ಚಾಲಿತ ನಗರ ನವೀಕರಣಕ್ಕೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಹೊಂದಿಸಲಾಗಿದೆ. ಬಿಬಿಎಂಪಿ ಸಹಯೋಗದೊಂದಿಗೆ ನಡೆದ ಈ ಒಪ್ಪಂದದ ಅನುಸಾರ, ಹಸಿರು ಬೆಂಗಳೂರಿನ ಉಪಕ್ರಮವನ್ನು ಅನ್‌ಬಾಕ್ಸಿಂಗ್‌ ಫೌಂಡೇಷನ್‌ (ಯುಬಿಎಲ್ಆರ್) ನಿಭಾಯಿಸಲಿದೆ. ನಗರಾದ್ಯಂತ ಬಳಕೆಯಾಗದೇ ಖಾಲಿ ಇರುವ ಸಾರ್ವಜನಿಕ ಭೂಮಿಯಲ್ಲಿ ಹೆಚ್ಚು ಸಸಿ ನೆಡುವ ಮೂಲಕ ಸಣ್ಣ ಅರಣ್ಯ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸೂಕ್ತ ಪ್ರದೇಶಗಳನ್ನು ಗುರುತಿಸುವುದು, ಅನುಷ್ಠಾನಕ್ಕೆ ಅನುಮತಿ ಒದಗಿಸುವುದು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನ ನಡೆಸಲು ಬಿಬಿಎಂಪಿ ಒಡೆತನದ ಉದ್ಯಾನವನ ಮತ್ತು ಆವರಣಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ಸಹಕಾರ ನೀಡಲಿದೆ. ಸಾಧ್ಯವಾದರೆ, ಸರ್ಕಾರಿ ನರ್ಸರಿಗಳಿಂದ ಸಸಿಗಳನ್ನು ಯಾವುದೇ ವೆಚ್ಚವಿಲ್ಲದೆ ಒದಗಿಸಲಾಗುವುದು ಎಂದು ಹೇಳಿದರು.

ಯೋಜನೆಯನ್ನು ಸೂಕ್ತವಾಗಿ ಅನುಷ್ಠಾನಗೊಳಿಸಲು ಯುಬಿಎಲ್ ಆರ್ ಇತರರ ಸಹಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ. ಅದರಲ್ಲೂ ಹಿಂದೆಲ್ಲಾ ಗಾರ್ಡನ್‌ ಸಿಟಿ ಎಂಬ ಹೆಗ್ಗಳಿಕೆ ಹೊಂದಿದ್ದ ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸಲು  ಭಾರತದಲ್ಲೇ ನಮ್ಮ ನಗರದ ಗೌರವ ಎತ್ತಿ ಹಿಡಿಲು ಸಹಕರಿಸುವ ಎಲ್ಲಾ ಸಮಾನ ಮನಸ್ಕ ಪಾಲುದಾರರು ಹಾಗೂ ಸಾರ್ವಜನಿಕರು ಸಹಕಾರ ಕೋರಿದೆ. ಈಗಾಗಲೇ ಪ್ರಮುಖವಾಗಿ ಯುನೈಟೆಡ್‌ ವೇ ಬೆಂಗಳೂರು, ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್‌) ರೇನ್‌ ಮ್ಯಾಟರ್‌ ಫೌಂಡೇಶನ್‌ ಹಾಗೂ ಇತರೆ ಸಂಸ್ಥೆಗಳು ಬೆಂಬಲ ಸೂಚಿಸುತ್ತಿವೆ.

ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದ ಅನ್‌ ಬಾಕ್ಸಿಂಗ್‌ ಬಿಎಲ್‌ ಆರ್ ಫೌಂಡೇಶನ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, “ನಗರದಲ್ಲಿ ಹಸಿರು ಸ್ಥಳಗಳ ಕೊರತೆ  ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಆದರೆ ಅದನ್ನು ಹೇಗೆ ಪರಿಹರಿಸುವುದು? ಜೆಪಿ ನಗರದಲ್ಲಿ ಎಲ್ಲೋ ಒಂದು ಮಿನಿ ಅರಣ್ಯದ ಬಗ್ಗೆ ನಾವು ಕೇಳಿದ್ದೇವೆ, ನಗರದ ಇತರೆ ಪ್ರದೇಶದಲ್ಲೂ ಹೆಚ್ಚಿನ ಸಾಂದ್ರತೆಯ ಸಸಿ ನೆಡುವಿಕೆ ಮೂಲಕ ಪ್ರತಿ ನೆರೆಹೊರೆಯಲ್ಲಿಯೂ ಮಿನಿ ಅಥವಾ ಮೈಕ್ರೋ ಅರಣ್ಯವನ್ನು ಹೊಂದುವಂತಾಗಬೇಕು. ಆದ್ದರಿಂದ, ಮುಂದಿನ 18 ತಿಂಗಳುಗಳಲ್ಲಿ, ನಮ್ಮ ನಗರದೊಳಗೆ 100 ಮಿನಿ ಅಥವಾ ಮೈಕ್ರೋ ಅರಣ್ಯಗಳನ್ನು ಹೊಂದುವ ಗುರಿ ಹೊಂದಿದ್ದೇವೆ, ಕೇವಲ ಮಧ್ಯ ಬೆಂಗಳೂರಿನಲ್ಲಿ ಮಾತ್ರವಲ್ಲದೇ, ಬೆಂಗಳೂರಿನ ಬಾಹ್ಯ ಭಾಗಗಳಲ್ಲಿ. ಸ್ಥಳೀಯ ಜಾತಿಯ ಸಸಿಗಳನ್ನೇ ನೆಡಲಾಗುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೌರವಾನ್ವಿತ ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್‌ ಮತ್ತು ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರ ಬೆಂಬಲದೊಂದಿಗೆ ನಾವು ದೇಶದಲ್ಲಿ 100 ಮಿನಿ ಅಥವಾ ಮೈಕ್ರೋ ಅರಣ್ಯಗಳನ್ನು ಹೊಂದಿರುವ ಮೊದಲ ನಗರವಾಗುತ್ತೇವೆ ಎಂದು ಹೇಳಿದರು.”

More articles

Latest article