ಹುಡುಗಿಯರು ತುಂಡು ಬಟ್ಟೆ ಧರಿಸಬಾರದು: ಮ.ಪ್ರ. ಸಚಿವ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ

Most read

ಭೋಪಾಲ್: ನನಗೆ ತುಂಡು ಬಟ್ಟೆ ಧರಿಸುವ ಹುಡುಗಿಯರು ಇಷ್ಟವಿಲ್ಲ ಎಂದು ಹೇಳುವ ಮೂಲಕ ಮಧ್ಯ ಪ್ರದೇಶದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಮತ್ತು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಮತ್ತೊಮ್ಮೆ  ವಿವಾದಕ್ಕೆ ಸಿಲುಕಿದ್ದಾರೆ.

ಇಂದೋರ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ತುಂಡುಡುಗೆಯನ್ನು ಧರಿಸುವ ಮಹಿಳೆಯನ್ನು ಸುಂದರಿ ಎಂದು ಪರಿಗಣಿಸಲಾಗುತ್ತದೆ. ನಾನು ಅದನ್ನು ಒಪ್ಪುವುದಿಲ್ಲ. ಭಾರತದಲ್ಲಿ, ಹುಡುಗಿ ಮೈತುಂಬಾ ಚೆನ್ನಾಗಿ ಬಟ್ಟೆ ತೊಟ್ಟು ಆಭರಣಗಳನ್ನು ಧರಿಸಿದಾಗ ಮಾತ್ರ ಆಕೆಯನ್ನು ಸುಂದರಿ ಎಂದು ಪರಿಗಣಿಸಲಾಗುತ್ತದೆ ಎಂದು ಭಾಷಣದಲ್ಲಿ ಹೇಳಿದ್ದಾರೆ.

, ಪಾಶ್ಚಿಮಾತ್ಯ ದೇಶಗಳಲ್ಲಿ, ಕಡಿಮೆ ಬಟ್ಟೆ ಧರಿಸುವ ಮಹಿಳೆಯನ್ನು ಸುಂದರಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಕಡಿಮೆ ಮಾತನಾಡುವ ನಾಯಕರನ್ನು ಒಳ್ಳೆಯವರು ಎಂದೂ ಭಾವಿಸಲಾಗುತ್ತದೆ.  ಆದರೆ, ನಾನು ಅದನ್ನು ನಂಬುವುದಿಲ್ಲ. ಮಹಿಳೆ ದೇವತೆಯ ರೂಪ ಎಂದು ನಾನು ನಂಬುತ್ತೇನೆ. ಆಕೆ ಒಳ್ಳೆಯ ಬಟ್ಟೆಗಳನ್ನು ಧರಿಸಬೇಕು ಎಂದು ಭಾಷಣ ಮಾಡುತ್ತಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

More articles

Latest article