ಮಳೆಗೆ ಮೊದಲ ಬಲಿ: ವಿಜಯಪುರದಲ್ಲಿ ಸಿಡಿಲು ಬಡಿದು ಬಾಲಕನ ಸಾವು

Most read

ವಿಜಯಪುರ: ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ವಿಜಯಪುರ ಜಿಲ್ಲೆಯಲ್ಲಿ ಇಂದು ಅಲ್ಲಲ್ಲಿ ಮಳೆಯಾಯಿತು. ಆದರೆ ಸಿಡಿಲು ಬಡಿದು ಬಾಲಕನೊಬ್ಬ ದುರ್ಮರಣಕ್ಕೆ ಈಡಾದ ಘಟನೆಯೂ ನಡೆಯಿತು.

ಬೀರಪ್ಪ ನಿಂಗಪ್ಪ ಅವರಾದಿ ಮೃತಪಟ್ಟ ಬಾಲು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಾವಿನಹಳ್ಳಿ ಬಳಿ ಈ ಘಟನೆ ನಡೆದಿದೆ.

ಮಳೆ ಶುರುವಾದಾಗ ಬಾಲಕ ಜಮೀನಿನಲ್ಲಿ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಆತ ಸಾವನ್ನಪ್ಪಿದ್ದಾನೆ.

More articles

Latest article