ಡಿಕೆ ಬ್ರದರ್ಸ್ ಎರಡು ತಾಸಿನಲ್ಲಿ ಬಿಜೆಪಿ ಅಲೆ ಬದಲಿಸಿಬಿಡ್ತಾರೆ: ನಿಖಿಲ್ ಕುಮಾರಸ್ವಾಮಿ

Most read

ರಾಮನಗರ: ಈ ಬಾರಿ ಮತದಾನದ ಹಿಂದಿನ ದಿನ ನಾನು ನಿದ್ದೆ ಮಾಡುವುದೇ ಇಲ್ಲ. ರಾತ್ರಿ ಎರಡು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಸಂಪೂರ್ಣ ಎಚ್ಚರವಾಗಿರುತ್ತೇನೆ, ಯಾಕೆಂದರೆ ಆ ಎರಡು ತಾಸಿನಲ್ಲಿ ಬಿಜೆಪಿ ಅಲೆಯನ್ನು ಬದಲಿಸಿಬಿಡುವ ಶಕ್ತಿ ಡಿಕೆ ಬ್ರದರ್ಸ್ (ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್) ಅವರಿಗಿದೆ ಎಂದು ಜೆಡಿಎಸ್ ಯುವನಾಯಕ ನಾಯಕ, ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಡಿಕೆ ಬ್ರದರ್ಸ್ ತಂತ್ರಗಳನ್ನು ಮೀರಿ ಪಕ್ಷದ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಗೆಲುವಿಗೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಕಳೆದ ಬಾರಿ ಗಿಫ್ಟ್ ಹಂಚಿರೋದು ನಮಗೆ ಗೊತ್ತಿದೆ. ಈ ಬಾರಿ ಆ ಇತಿಹಾಸ ಮರುಕಳಿಸಲ್ಲ ಎಂದ ನಿಖಿಲ್, ಬಿಜೆಪಿ ಅಲೆಯನ್ನು ಡಿಕೆ ಬ್ರದರ್ಸ್ 2 ತಾಸಿನಲ್ಲಿ ಬದಲಿಸ್ತಾರೆ. ಅದಕ್ಕೆ ಈ ಬಾರಿ ನಾನು ಆ ಎರಡು ದಿನ ಮಲಗುವುದಿಲ್ಲ. ರಾತ್ರಿ 2 ರಿಂದ ಬೆಳಗ್ಗೆ 4ರವರೆಗೆ ನಾನು ನಿದ್ದೆ ಮಾಡಲ್ಲ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸುಮಲತಾ ಎದುರು ನೆಲಕಚ್ಚಿದ್ದರು. ಅದಾದ ನಂತರ ಕಳೆದ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ತಮ್ಮ ರಾಜಕೀಯ ಜೀವನದ ಎರಡನೇ ಸೋಲು ಕಂಡಿದ್ದರು. ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ನಿಖಿಲ್ ಅವರನ್ನು ಮಣಿಸಿದ್ದರು. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ತಂತ್ರಗಾರಿಕೆಯ ಮುಂದೆ ನಿಖಿಲ್ ಗೆಲುವು ಮರೀಚಿಕೆಯಾಗಿತ್ತು.

ಕಳೆದ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುವ ಧಾವಂತದಲ್ಲಿರುವ ನಿಖಿಲ್ ಕುಮಾರಸ್ವಾಮಿ, ತಮ್ಮ ಸೋದರ ಮಾವ ಮಂಜುನಾಥ್ ಗೆಲ್ಲಿಸಿಕೊಳ್ಳಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.

More articles

Latest article