ಫೆ. 10ಕ್ಕೆ ಬಿ.ಟಿ. ಜಾಹ್ನವಿಯವರ ಹೊಸ ಕಥಾ ಸಂಕಲನ ` ಬಿಡುಗಡೆ

Most read

ದಾವಣಗೆರೆ: ಖ್ಯಾತ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಹೊಸ ಕಥಾ ಸಂಕಲನ `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕದ ಬಿಡುಗಡೆ ಸಮಾರಂಭವು ದಿ.10-02-2024, ಶನಿವಾರ ಬೆಳಿಗ್ಗೆ 10.30ಕ್ಕೆ  ದಾವಣಗೆರೆಯಲ್ಲಿ ನಡೆಯಲಿದೆ.

ವಿದ್ಯಾನಗರ, ಕನ್ನಡ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಬಸವರಾಜು ಜಿ.ಪಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಎ.ಬಿ. ರಾಮಚಂದ್ರಪ್ಪ, ಸಂಚಾಲಕರು, ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇವರು ವಹಿಸಿದ್ದು, ಲೇಖಕ ಡಾ. ರವಿಕುಮಾರ ನೀಹ, ಲೇಖಕಿ ವಿಮರ್ಶಕಿ ಸೌಮ್ಯ ಕೋಡೂರು, ಸಾಹಿತಿ ಡಾ. ಮಮತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಿ.ಟಿ.ಜಾಹ್ನವಿಯವರ ಕಥೆಯನ್ನು ಆಧರಿಸಿದ `ದೂಪ್ದಳ್ಳಿ ಸೆಕ್ಸಿ ದುರುಗ’ ಎಂಬ ನಾಟಕ ಪ್ರದರ್ಶನವೂ ಜರುಗಲಿದೆ.

More articles

Latest article