ರಾಯಬಾಗ:ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಸ್ವಾಮೀಜಿ ಮಠ ಧ್ವಂಸ

Most read

ಬೆಳಗಾವಿ: ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಆರೋಪದ ಮೇಲೆ ಸ್ವಯಂ ಘೋಷಿತ ಮಠಾಧೀಶ ಲೋಕೇಶ್ವರ ಸ್ವಾಮಿ ಎಂಬುವರನ್ನು ಬಂಧಿಸಿದ ನಂತರ, ಅವರಿಗೆ ಸೇರಿದ ಮಠವನ್ನು ರಾಯಬಾಗ ತಾಲ್ಲೂಕು ಆಡಳಿತದ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದ್ದಾರೆ.

ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ 8 ಎಕರೆ ಗೋಮಾಳವನ್ನು ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಲೋಕೇಶ್ವರ ಸ್ವಾಮೀಜಿ ಅಕ್ರಮವಾಗಿ ಮಠ ನಿರ್ಮಿಸಿಕೊಂಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಈ ಭೂಮಿಯ ಪರಿಶೀಲನೆ ನಡೆಸಿದ ರಾಯಬಾಗ ತಹಶಿಲ್ದಾರರು ಮಠವನ್ನು ತೆರವುಗೊಳಿಸುವಂತೆ ಕಳೆದ ವಾರ ನೋಟಿಸ್ ನೀಡಿದ್ದರು. ತಡರಾತ್ರಿ ತಹಶಿಲ್ದಾರರ ಸಮ್ಮುಖದಲ್ಲಿ ಮೂರು ಜೆಸಿಬಿ ಬಳಸಿ ಮಠವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಮೂರು ಬುಲ್ಡೋಜರ್‌ ಗಳನ್ನು ಬಳಸಿ ಮಠವನ್ನು ಕೆಡವಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಠಕ್ಕೆ ಸಂಬಂಧಿಸಿದ ದೇವಾಲಯವನ್ನೂ ಕೆಡವಲಾಗಿದೆ.

More articles

Latest article