ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, 98 ಬಲಿ: ಒಟ್ಟು ಸಾವಿನ ಸಂಖ್ಯೆ 300ಕ್ಕೆ ಏರಿಕೆ!

Most read

ಬಾಂಗ್ಲಾದೇಶದಲ್ಲಿ ಮತ್ತೆ ಮೀಸಲು ನೀತಿ ವಿರೋಧಿಸಿ ಹೋರಾಟ ನಡೆಯುತ್ತಿದೆ, ಇದರ ನಡುವೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಭಾನುವಾರ ಈ ಘಟನೆಯಿಂದಾಗಿ 98 ಮಂದಿ ಮೃತಪಟ್ಟಿದ್ದು, ನೂರಾರು ನಾಗರಿಕರು ಗಾಯಗೊಂಡಿದ್ದಾರೆ. ದೇಶಾದ್ಯಂತ ಕರ್ಪ್ಯೂ ಜಾರಿಗೊಳಿಸಲಾಗಿದೆ.

1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾದವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ನಿರ್ಧಾರವನ್ನು ವಿದ್ಯಾರ್ಥಿ ಒಕ್ಕೂಟ ಬಲವಾಗಿ ವಿರೋಧಿಸಿದೆ. ಸರಕಾರ ನಿರ್ಧರಿಸಿದ್ದ ಶೇ. 30ರಷ್ಟು ಮೀಸಲನ್ನು ಸುಪ್ರೀಂ ಕೋರ್ಟ್‌, ಶೇ. 5ಕ್ಕೆ ಇಳಿಸಿದೆ. ಆ ತೀರ್ಪಿನ ಬಳಿಕವೂ ಹೋರಾಟ ಮುಂದುವರಿದಿದ್ದು, ಭಾನುವಾರ ದೇಶದ ವಿವಿಧೆಡೆ ಘರ್ಷಣೆ ನಡೆದಿದೆ.

ಪ್ರತಿಭಟನಾಕಾರರು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಗ್ರೆನೇಡ್‌ ಬಳಸಿದ್ದಾರೆ.

ಪೊಲೀಸರ ಪ್ರಕಾರ, ಬಾಂಗ್ಲಾದೇಶದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಂದ ಒಟ್ಟು ಸಾವಿನ ಸಂಖ್ಯೆ ಕನಿಷ್ಠ 300 ತಲುಪಿದೆ.

More articles

Latest article