AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7695 POSTS
0 COMMENTS

ಜೂ. 20 ರಿಂದ ಜು.12 ರವರೆಗೆ  ಮಹಾರಾಜ ಟ್ರೋಫಿ , ಮೈಸೂರು ವಾರಿಯರ್ಸ್ ಗೆ ವೈಶಾಖ್ ವಿಜಯ್ ಕುಮಾರ್ ನಾಯಕ

ಮೈಸೂರು: ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯು  ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿದೆ. ಇದರ ಅಧಿಕೃತ ಗೀತೆಯನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು. ಮೈಸೂರು ವಾರಿಯರ್ಸ್ ತಂಡ ಪ್ರಕಟಲಾಗಿದೆ. ತಂಡದ ನಾಯಕನಾಗಿ ವೈಶಾಖ್ ವಿಜಯ್ ಕುಮಾರ್ ಆಯ್ಕೆಯಾಗಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತು ಮೈಸೂರು ವಲಯದ ಸಂಚಾಲಕ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಸೇರಿ ಈ ಗೀತೆಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಜಾವಗಲ್ ಶ್ರೀನಾಥ್, ಮಹಾರಾಜ ಟ್ರೋಫಿಯು ಪ್ರಾದೇಶಿಕ ಪ್ರತಿಭೆಗಳಿಗೆ ಸದಾ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈ ಹೊಸ  ಅಧಿಕೃತ ಗೀತೆಯ ಹಿಂದಿರುವ ಉತ್ಸಾಹವನ್ನು ನೋಡಿದರೆ,2026 ರ ಸೀಸನ್ ಕರ್ನಾಟಕದಾದ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತು ಅಭಿಮಾನಿಗಳ ಮನರಂಜನೆಯಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದರು. ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರು,ಗ್ರಾಮೀಣ ಮಟ್ಟದ ಪ್ರತಿಭೆಗಳು ಮತ್ತು ವೃತ್ತಿಪರ ಕ್ರಿಕೆಟ್ ವೇದಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಕೆಎಸ್‌ ಸಿಎನಲ್ಲಿ ನಮ್ಮ ಪ್ರಮುಖ ಗುರಿಯಾಗಿದೆ. ಈ ಗೀತೆಯು ಕರ್ನಾಟಕದ ಕ್ರಿಕೆಟ್ ಜಗತ್ತಿನ ಚೇತನ, ಹಸಿವು ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ, ಇದು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ  ಎಂದು ತಿಳಿಸಿದರು. ಮೈಸೂರು ವಲಯದ ಸಂಚಾಲಕ ಶ್ರೀನಿವಾಸ್ ಪ್ರಸಾದ್ ಮಾತನಾಡಿ,ಮೈಸೂರಿಗೆ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿದೆ. ಈ ಬಾರಿಯ ಆವೃತ್ತಿಯ ಮೊದಲ ಹಂತದ ಪಂದ್ಯಗಳಿಗೆ ನಮ್ಮ ನಗರ ಆತಿಥ್ಯ ವಹಿಸುತ್ತಿರುವುದು ನಮಗೆ ಸಿಕ್ಕ ಗೌರವವಾಗಿದೆ. ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿಯೇ ಟೂರ್ನಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿರುವುದು ಇಡೀ ಕ್ರಿಕೆಟ್ ಹಬ್ಬಕ್ಕೆ ಅತ್ಯಂತ ರೋಮಾಂಚಕ ಮುನ್ನುಡಿಯನ್ನು ಬರೆದಿದೆ ಎಂದರು. ಈ ಸಂದರ್ಭದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಹಾಗೂ ಎನ್.ಆರ್. ಗ್ರೂಪ್ ಒಡೆತನದ ಮೈಸೂರು ವಾರಿಯರ್ಸ್ ತಂಡವು ಮುಂಬರುವ ಸೀಸನ್‌ ಗಾಗಿ ತನ್ನ ಬಹುನಿರೀಕ್ಷಿತ ತಂಡವನ್ನು ಅಧಿಕೃತವಾಗಿ ಘೋಷಿಸಿತು. ಕರ್ನಾಟಕ ಮತ್ತು ಐಪಿಎಲ್‌ ನ ಪ್ರಸಿದ್ಧ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್ ಅವರಿಗೆ ಈ ಸೀಸನ್‌ ನಲ್ಲಿ ತಂಡವನ್ನು ಮುನ್ನಡೆಸುವ ನಾಯಕತ್ವದ  ಜವಾಬ್ದಾರಿನೀಡಲಾಗಿದೆ ಎಂದು ಫ್ರಾಂಚೈಸಿ ಘೋಷಿಸಿತು. ವೈಶಾಖ್ ಅವರು ತಮ್ಮ ದೇಶಿ ಮತ್ತು ಐಪಿಎಲ್ ಕ್ರಿಕೆಟ್‌ ನ ಅಪಾರ ಅನುಭವವನ್ನು ತಂಡಕ್ಕೆ ಧಾರೆ ಎರೆಯಲಿದ್ದು, ತಂಡದ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿಯೂ ದ್ವಿಪಾತ್ರ ನಿರ್ವಹಿಸಲಿದ್ದಾರೆ. ಮುಖ ಆಟಗಾರರು: ಅಂತರರಾಷ್ಟ್ರೀಯ ತಾರೆ ದೇವದತ್ ಪಡಿಕ್ಕಲ್, ಆಕ್ರಮಣಕಾರಿ ಆಲ್ ರೌಂಡರ್ ಮನೋಜ್ ಭಾಂಡಗೆ, ಚೇತನ್ ಎಲ್.ಆರ್. ಮತ್ತು ರಿತೇಶ್ ಭಟ್ಕಲ್. ಈ ಸೀಸನ್‌ ನಲ್ಲಿ ಗ್ರಾಮೀಣ ಮತ್ತು ತಳಮಟ್ಟದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಫ್ರಾಂಚೈಸಿ ವಿಶೇಷ ಒತ್ತು ನೀಡಿದೆ. ಹೊಸ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ ಅವರು, ಈ ವರ್ಷದ ತಂಡವು ಕರ್ನಾಟಕ ಕ್ರಿಕೆಟ್‌ನ ಉಜ್ವಲ ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ. ಯುವ ಆಟಗಾರರಲ್ಲಿ ಗೆಲ್ಲುವ ಹಸಿವು ಎದ್ದು ಕಾಣುತ್ತಿದೆ. ಗ್ರಾಮೀಣ ಮಟ್ಟದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಪ್ರತಿಭೆಗಳಿಗೆ ಇಂತಹ ಪ್ರಮುಖ ವೇದಿಕೆಯನ್ನು ಕಲ್ಪಿಸಿಕೊಡಲು ನಾವು ಹೆಮ್ಮೆಪಡುತ್ತೇವೆ,” ಎಂದು ಹೇಳಿದರು. ಮುಖ್ಯ ಕೋಚ್ ಆರ್.ಎಕ್ಸ್ ಮುರಳೀಧರ್ ಅವರು ತಂಡದ ಕಾರ್ಯತಂತ್ರದ ಬಗ್ಗೆ ಇದೇ ರೀತಿಯ ಆಶಾವಾದವನ್ನು ವ್ಯಕ್ತಪಡಿಸಿ, “ನಮ್ಮ ತಂಡವು ಅನುಭವ ಮತ್ತು ಯುವ ಶಕ್ತಿಯ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ವೈಶಾಖ್ ಅವರಂತಹ ನಾಯಕನ ನೇತೃತ್ವದಲ್ಲಿ ನಮ್ಮ ತಂಡವು ಈ ಸೀಸನ್‌ನಲ್ಲಿ ಅತ್ಯಂತ ಸಕಾರಾತ್ಮಕ ಮತ್ತು ನಿರ್ಭೀತ ಕ್ರಿಕೆಟ್ ಆಡಲಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ ಎಂದು ತಿಳಿಸಿದರು. ನಾಯಕತ್ವದ ಜವಾಬ್ದಾರಿಯನ್ನು ಸ್ವೀಕರಿಸಿದ ನಾಯಕ ವೈಶಾಖ್ ವಿಜಯ್ ಕುಮಾರ್ ಅವರು ತಮ್ಮ ತಂಡದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದು, ಮೈಸೂರು ನಗರವು ಹೆಮ್ಮೆಪಡುವಂತಹ ಕ್ರಿಕೆಟ್ ಪ್ರದರ್ಶನವನ್ನು ನೀಡುವುದಾಗಿ ಭರವಸೆ ನೀಡಿದರು. ಮೈಸೂರಿನಲ್ಲಿ ಆರಂಭ ಟೂರ್ನಿಯು ಮೈಸೂರಿನಲ್ಲಿ ಪ್ರಾರಂಭವಾಗಿ ನಂತರ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದ್ದು, ಕರ್ನಾಟಕದಾದ್ಯಂತ ಇರುವ ಅಭಿಮಾನಿಗಳಿಗೆ ಉನ್ನತ ಗುಣಮಟ್ಟದ ಕ್ರಿಕೆಟ್ ರಸದೌತಣವನ್ನು ಉಣಬಡಿಸಲಿದೆ. ಕ್ರಿಕೆಟ್ ಪ್ರೇಮಿಗಳು ಜೂನ್ 20 ರಿಂದ ಜುಲೈ 12,  ರವರೆಗೆ ನಡೆಯುವ ಎಲ್ಲಾ ಪಂದ್ಯಗಳನ್ನು ಕಣ್ಣುಂಬಿಕೊಳ್ಳಬಹುದು.  ಪಂದ್ಯಗಳ ಟಿಕೆಟ್‌ಗಳು ಡಿಸ್ಟ್ರಿಕ್ಟ್ ಬೈ ಜೊಮ್ಯಾಟೋ ಆಪ್‌ನಲ್ಲಿ ಲಭ್ಯವಿರುತ್ತವೆ.

14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರಕಾರವು 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಬಿಡಿಎ ಆಯುಕ್ತ ಮೇಜರ್ ಪಿ.ಮಣಿವಣ್ಣನ್ ಅವರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರ ಹುದ್ದೆಯ...

ಇರುವ ವ್ಯವಸ್ಥೆಯಲ್ಲೇ ಪರಿಣಾಮಕಾರಿಯಾಗಿ ಕೆಲಸ ಮಾಡಿ, ಕಸದ ಸಮಸ್ಯೆ ನಿವಾರಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಬೆಂಗಳೂರು : ನಗರದಲ್ಲಿನ ಕಸದ ಸಮಸ್ಯೆ ನಿವಾರಣೆಗಾಗಿ ಈಗಿರುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ  ಕೃಷ್ಣ ಬೈರೇಗೌಡ  ತಿಳಿಸಿದರು. ಗ್ರೇಟರ್ ಬೆಂಗಳೂರು...

ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳ ಗೆಲುವು

ಬೆಂಗಳೂರು: ಇಂದು ನಡೆದ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರೆ,  ಜೆಡಿಎಸ್‌ನ ಗೋವಿಂದರಾಜು ಸೋಲನ್ನು ಅನುಭವಿಸಿದ್ದಾರೆ.ಬಿಜೆಪಿ, ಜೆಡಿಎಸ್‌ನಿಂದ ಅಡ್ಡ ಮತದಾನ...

ನೀಟ್‌ ಪರೀಕ್ಷೆ ರದ್ದಾದ ಬಳಿಕ ಇದುವರೆಗೂ 11 ಮಂದಿ ನಿಧನ

ನವದೆಹಲಿ :  ನೀಟ್‌ NEET-UG ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ   ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಂಡ ನಂತರ ಮತ್ತು ಜೂನ್ 21ರಂದು ಮರುಪರೀಕ್ಷೆ ನಿಗದಿಯಾಗುವವರೆಗೆ ಕಳೆದ 46 ದಿನಗಳಲ್ಲಿ, ದೇಶದಾದ್ಯಂತ...

ಜೈಲಿನಿಂದಲೇ ಸಂಧ್ಯಾ ನಾಗರಾಜ್‌ ವಿರುದ್ಧ ದೂರು ದಾಖಲಿಸಿರುವ ಪವಿತ್ರಾ ಗೌಡ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾಗೌಡ, ಜೈಲಿನಲ್ಲಿದ್ದು ಹೊರ ಬಂದಿರುವ ಸಂಧ್ಯಾ ನಾಗರಾಜ್‌ ಎಂಬುವರ ವಿರುದ್ಧ ದೂರು ನೀಡಿದ್ದಾರೆ. 3 ತಿಂಗಳುಗಳ ಕಾಲ ಜೈಲಿನಲ್ಲಿದ್ದು ಜಾಮೀನು...

ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಖಾಸಗಿ ಆಸ್ಪತ್ರೆ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

ಕೋಲಾರ :  ಶ್ರೀನಿವಾಸಪುರ ತಾಲ್ಲೂಕು  ಸೋಮಯಾಜನಹಳ್ಳಿ ಪಂಚಾಯತಿಗೆ ಸೇರಿದ ಓಜಲಹಳ್ಳಿ ಗ್ರಾಮದ ರೈತ ಮಹಿಳೆ ಯಶಸ್ವಿನಿ ಎಂಬಾಕೆಯು ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದು, ಈ ವೇಳೆ  ಶ್ರೇಯಾ ಆಸ್ಪತ್ರೆಯ ವೈದ್ಯರು  ಆಕೆಯ...

ತಮಿಳುನಾಡು ಸಿಎಂ ಹುಟ್ಟುಹಬ್ಬ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಝೂ ಪ್ರವೇಶ

ಚೆನ್ನೈ: ಮುಖ್ಯಮಂತ್ರಿ ಆದ ನಂತರ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ  ಸಿ. ಜೋಸೆಫ್ ವಿಜಯ್ ರಾಜ್ಯದ ಮೂರು ಪ್ರಮುಖ ಮೃಗಾಲಯಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿರುವುದು  ಸರ್ಕಾರ ಪ್ರಕಟಿಸಿದೆ. ಇದೇ ಜೂನ್ 21 ಮತ್ತು...

ವಿಧಾನಪರಿಷತ್‌ ಚುನಾವಣೆ : ಅಡ್ಡ ಮತದಾನ ಮಾಡಿದ್ರ ಜಿ.ಟಿ.ದೇವೇಗೌಡ?

ಬೆಂಗಳೂರು : ರಾಜ್ಯದ 7 ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದುವರೆಗೂ ಶೇ.34ರಷ್ಟು ಮತದಾನವಾಗಿದ್ದು, 4 ಗಂಟೆಯವರೆಗೆ ಮತದಾನವಾಗಲಿದೆ. ಸಂಜೆ 6 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಶಾಸಕ ಜಿ.ಟಿ.ದೇವೇಗೌಡ ಮೊದಲ ಮತ ಚಲಾಯಿಸುವ ಮೂಲಕ ಅಡ್ಡ...

ಕರ್ತವ್ಯ ಅಪ್ಲಿಕೇಷನ್‌ನಲ್ಲಿ ನೋಂದಣಿ ಕಡ್ಡಾಯ

ಬೆಂಗಳೂರು : ಕರ್ತವ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಂದಾಯಿಸಿ ಕೊಳ್ಳದ ಸರ್ಕಾರಿ ಅಧಿಕಾರಿ ಹಾಗೂ ನೌಕರರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚಿಸಿದ್ದಾರೆ.ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಹಾಗೂ...

Latest news