ಕೇಜ್ರಿವಾಲ್ ಅವರು ತಮ್ಮ ಕೃತ್ಯಗಳಿಂದಲೇ ಬಂಧನಕ್ಕೆ ಒಳಗಾಗಿದ್ದಾರೆ :  ಅಣ್ಣಾ ಹಜಾರೆ

Most read

ಮದ್ಯದ ವಿರುದ್ದ ಹೋರಾಟ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಕೃತ್ಯಗಳಿಂದಲೇ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ಧಾರೆ.

ಮಹಾರಾಷ್ಟ್ರದ ಅಹಮದ್‌ ನಗರದಲ್ಲಿ ಮಾತನಾಡಿದ ಅವರು, ಆತ ನನ್ನೊಂದಿಗೆ ಸೇರಿ ಮದ್ಯದ ವಿರುದ್ಧ ದನಿ ಎತ್ತಿದ್ದರು. ಆದರೆ ತಮ್ಮದೇ ಸರ್ಕಾರ ರಚಿಸಿದ ಬಳಿಕ ಮದ್ಯದ ನೀತಿ ಜಾರಿಗೆ ತರಲು ಹೊರಟರು. ಈಗ ತಮ್ಮ ಕೃತ್ಯಗಳಿಂದಲೇ ಬಂಧನಕ್ಕೆ ಒಳಗಾಗಿದ್ದಾರೆ. ಅರವಿಂದ ಕೇಜ್ರಿವಾಲ್ ನಡೆಗೆ ಬೇಸರವಾಗಿ ಎಂದು ಹೇಳಿದ್ದಾರೆ.

ಈ ವಿಷಯವಾಗಿ ನಾನು ಅರವಿಂದ ಕೇಜ್ರಿವಾಲ್ ಅವರ ವಿಚಾರವಾಗಿ ತುಂಬಾನೇ ಬೇಸರಗೊಂಡಿದ್ಧೇನೆ. ಆದರೆ ಅವರ ಕೆಲಸಗಳೇ ಅವರನ್ನು ಬಂಧನ ಆಗುವಂತೆ ಮಾಡಿದೆ. ಬಂಧನ ಮಾಡಿರುವುದು ಸರಿ ಇದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯವು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಗುರುವಾರ ರಾತ್ರಿ ಬಂಧನ ಮಾಡಿತು

More articles

Latest article