ಶಿವಮೊಗ್ಗ: ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂದ ಕ್ರೂರಿ ಪ್ರಿಯಕರ

Most read

ಬೆಂಗಳೂರು: ಪ್ರೀತಿಸಿದ ಯುವತಿಯನ್ನೇ ಕೊಂದ ಹಲವು ಪ್ರಕರಣಗಳು ವರದಿಯಾದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಯುವತಿಯೋರ್ವಳು ಪ್ರಿಯಕರನಿಂದಲೇ ಕೊಲೆಗೀಡಾಗಿದ್ದಾಳೆ.

ಯುವಕ ಯುವತಿ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಮದುವೆ ಆಗುವಂತೆ ಒತ್ತಡ ಹೇರಿದ್ದ ಹಿನ್ನೆಲೆಯಲ್ಲಿ ಕ್ರೂರಿ ಪ್ರಿಯಕರ ಪ್ರೀತಿಸಿದ್ದ ಜೀವವನ್ನೇ ಬಲಿ ತೆಗೆದುಕೊಂಡಿದ್ದಾನೆ

ಚಿಕ್ಕಮಗಳೂರಿನ ಕೊಪ್ಪ ಮೂಲದ ಸೌಮ್ಯಾ ಕೊಲೆಗೀಡಾದ ದುರ್ದೈವಿ. ಶಿವಮೊಗ್ಗದ ಸಾಗರ ಮೂಲದ ಸೃಜನ್‌ ನಿಂದ ಕೊಲೆ ಮಾಡಿದ ಪಾತಕಿ.

ಸೌಮ್ಯಳನ್ನು ಕೊಲೆ ಮಾಡಿದ ನಂತರ ಪ್ರಕರಣ ಮುಚ್ಚಿಹಾಕಲು ಕೊಲೆಗಡುಕ ಸೃಜನ್ ಶವವನ್ನು ಸಾಗರ ತಾಲ್ಲೂಕಿನ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ.

ತೀರ್ಥಹಳ್ಳಿಯಲ್ಲಿ ಫೈನಾನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ಚಿಕ್ಕಮಗಳೂರಿನ ಕೊಪ್ಪಗೆ ಆಗಾಗ ಹಣ ವಸೂಲಿಗೆ ಹೋಗುತ್ತಿದ್ದ. ಈ ಸಂದರ್ಭದಲ್ಲಿ ನರ್ಸಿಂಗ್‌ ಓದುತ್ತಿದ್ದ ಯುವತಿ ಸೌಮ್ಯ ಜೊತೆ‌ ಪ್ರೇಮ ಆರಂಭವಾಗಿತ್ತು.

ಮನೆಯಲ್ಲಿ ಮದುವೆಯಾಗುವ ಒತ್ತಡವಿದ್ದ ಹಿನ್ನೆಲೆಯಲ್ಲಿ ಸೃಜನ್‌ ಮನವೊಲಿಸಲು ತೀರ್ಥಹಳ್ಳಿಗೆ ಬಂದಿದ್ದ ಸೌಮ್ಯಾ ಮದುವೆ ಆಗುವಂತೆ ಒತ್ತಾಯಿಸಿದ್ದಳು. ಮದುವೆಯಾಗದಿದ್ದರೆ ಮನೆಯಲ್ಲಿ ಬೇರೆ ಹುಡುಗನನ್ನು ನೋಡಿ ಮದುವೆ ಮಾಡುತ್ತಾರೆ ಎಂದು ಆಕೆ‌ ಆತಂಕ‌ ವ್ಯಕ್ತಪಡಿಸಿದ್ದಳು.

ಈ ಸಂದರ್ಭದಲ್ಲಿ ಸೌಮ್ಯಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಸೃಜನ್ ಆಕೆಯನ್ನು ಕೊಂದೇ ಹಾಕಿದ್ದಾನೆ. ನಂತರ ಮೃತದೇಹವನ್ನು ಮುಂಬಾಳು ಬಳಿ ಹೂತಿಟ್ಟಿದ್ದ.

ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೋಷಕರು‌ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸುವ ಸಂದರ್ಭದಲ್ಲಿ ಸೌಮ್ಯ ಕೊಲೆಗೀಡಾಗಿರುವುದು ಬೆಳಕಿಗೆ ಬಂದಿದೆ.

More articles

Latest article