ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಮುಷ್ಕರ

ಬೆಂಗಳೂರಿನಲ್ಲಿ ಪ್ರತಿಭಟನಾ ನಿರತ ಕಾರ್ಯಕರ್ತರು ಪೊಲೀಸರ ವಶಕ್ಕೆ

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ  ಖಂಡಿಸಿ ಕಾರ್ಮಿಕ ಸಂಘಟನೆಗಳು  ‘ಭಾರತ್ ಬಂದ್’  ನಡೆಸುತ್ತಿವೆ. 

ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು,  ಎಐಟಿಯುಸಿ, ಐಎನ್‌ಟಿಯುಸಿ, ಹೆಚ್‌ಎಂಎಸ್‌, ಎಲ್‌ಪಿಎಫ್‌  ಸೇರಿದಂತೆ  10ಕ್ಕೂ ಹೆಚ್ಚು ಪ್ರಮುಖ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರ ನಡೆಸುತ್ತಿವೆ. ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ   ರೈತ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ, ಬ್ಯಾಂಕ್, ವಿಮಾ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಗಳ ಬೆಂಬಲ‌ ಘೋಷಿಸಿವೆ. 

ಟೌನ್ ಹೌಲ್ ಮುಂಭಾಗ ಪ್ರತಿಭಟನೆ ಆಗಮಿಸಿದ ‌ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ನಲ್ಲಿ ಪ್ರತಿಭಟನಾಕಾರನನ್ನು ಕರೆದೊಯ್ದ ಪೊಲೀಸರು, ರಸ್ತೆ ತಡೆದು ಪ್ರತಿಭಟನೆ ಮಾಡಲು ಮುಂದಾದ ಕಾರ್ಮಿಕರು, ಮೂರು‌ ನಾಲ್ಕು ಬಿಎಂಟಿಸಿ  ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು  ಪೊಲೀಸರು ಕರೆದೊಯ್ದರು. 

ಬೇಡಿಕೆಗಳೇನು?
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 04 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಕಳೆದ ನ.21 ರಿಂದ  ಡಿ.30 ರಂದು ಕರಡು ನಿಯಮವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ರಾಜ್ಯ ಸರ್ಕಾರವೂ ಕಾರ್ಮಿಕ ಸಂಹಿತೆಯನ್ನ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಸಾರ್ವಜನಿಕರ ಅಭಿಪ್ರಾಯ ಕೋರಿದೆ. ಇದಕ್ಕೆ ಕರ್ನಾಟಕ ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. 
ಕಾರ್ಮಿಕ‌ ಕೋಡ್ ಗಳನ್ನ ಹಿಂಪಬಡೆಯಬೇಕು. ಅಣು ಶಕ್ತಿ ತಿದ್ದುಪಡಿ ಕಾಯ್ದೆ 25 ಹಿಂಪಡೆಯಬೇಕು.  ವಿದ್ಯುತ್ ತಿದ್ದುಪಡಿ ಕಾಯಿದೆ 25 ಹಿಂಪಡೆಯಬೇಕು. ಖಾಸಗೀಕರಣ ವಿರೋಧ, ಗುತ್ತಿಗೆ ಪದ್ಧತಿ ನಿಲ್ಲಿಸುವುದು.  ದುಡಿಯುವ ಜನರ ವಿರೋಧಿ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು.

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ  ಖಂಡಿಸಿ ಕಾರ್ಮಿಕ ಸಂಘಟನೆಗಳು  ‘ಭಾರತ್ ಬಂದ್’  ನಡೆಸುತ್ತಿವೆ. 

ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು,  ಎಐಟಿಯುಸಿ, ಐಎನ್‌ಟಿಯುಸಿ, ಹೆಚ್‌ಎಂಎಸ್‌, ಎಲ್‌ಪಿಎಫ್‌  ಸೇರಿದಂತೆ  10ಕ್ಕೂ ಹೆಚ್ಚು ಪ್ರಮುಖ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರ ನಡೆಸುತ್ತಿವೆ. ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ   ರೈತ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ, ಬ್ಯಾಂಕ್, ವಿಮಾ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಗಳ ಬೆಂಬಲ‌ ಘೋಷಿಸಿವೆ. 

ಟೌನ್ ಹೌಲ್ ಮುಂಭಾಗ ಪ್ರತಿಭಟನೆ ಆಗಮಿಸಿದ ‌ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ನಲ್ಲಿ ಪ್ರತಿಭಟನಾಕಾರನನ್ನು ಕರೆದೊಯ್ದ ಪೊಲೀಸರು, ರಸ್ತೆ ತಡೆದು ಪ್ರತಿಭಟನೆ ಮಾಡಲು ಮುಂದಾದ ಕಾರ್ಮಿಕರು, ಮೂರು‌ ನಾಲ್ಕು ಬಿಎಂಟಿಸಿ  ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು  ಪೊಲೀಸರು ಕರೆದೊಯ್ದರು. 

ಬೇಡಿಕೆಗಳೇನು?
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 04 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಕಳೆದ ನ.21 ರಿಂದ  ಡಿ.30 ರಂದು ಕರಡು ನಿಯಮವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ರಾಜ್ಯ ಸರ್ಕಾರವೂ ಕಾರ್ಮಿಕ ಸಂಹಿತೆಯನ್ನ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ಸಾರ್ವಜನಿಕರ ಅಭಿಪ್ರಾಯ ಕೋರಿದೆ. ಇದಕ್ಕೆ ಕರ್ನಾಟಕ ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. 
ಕಾರ್ಮಿಕ‌ ಕೋಡ್ ಗಳನ್ನ ಹಿಂಪಬಡೆಯಬೇಕು. ಅಣು ಶಕ್ತಿ ತಿದ್ದುಪಡಿ ಕಾಯ್ದೆ 25 ಹಿಂಪಡೆಯಬೇಕು.  ವಿದ್ಯುತ್ ತಿದ್ದುಪಡಿ ಕಾಯಿದೆ 25 ಹಿಂಪಡೆಯಬೇಕು. ಖಾಸಗೀಕರಣ ವಿರೋಧ, ಗುತ್ತಿಗೆ ಪದ್ಧತಿ ನಿಲ್ಲಿಸುವುದು.  ದುಡಿಯುವ ಜನರ ವಿರೋಧಿ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು.

More articles

Latest article

Most read